Posts

ರೂಬಿಕ್ ಕ್ಯೂಬ್ ನಲ್ಲಿ ಗಿನ್ನೆಸ್‌ ಮ್ಯಾಜಿಕ್ ಮಾಡಿದ‌ ಪೃಥ್ವಿಶ್

Image

ನೀನ್ನ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು .. Happy Mothers Day ❤

Image
ನೀನ್ನ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು                   ಅಮ್ಮಂದಿರ ಪ್ರಪಂಚವೇ ಅಂಥಹದು. ತನ್ನ ಮಕ್ಕಳು, ಗಂಡ ಇವೇ ಅವಳಿಗೆ ಗೊತ್ತಿರುವ ಜಗತ್ತು. ಅಲ್ಲಿಂದ ಹೊರ ಬರುವ ಅವಕಾಶ ಇದ್ದರೂ ಆಕೆಗೆ ಅದರಲ್ಲೇ ಸಂತೋಷ, ತೃಪ್ತಿ. ಪ್ರತಿಯೊಂದು ದಿನವೂ ಅಮ್ಮಂದಿರ ದಿನವೇ. ಅಮ್ಮನ ವಾತ್ಸಲ್ಯ, ಪ್ರೀತಿಯ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. "ತಾಯಿಗಿಂತ ಬಂಧುವಿಲ್ಲ,ಉಪ್ಪಿಗಿಂತ ರುಚಿ ಇಲ್ಲ" ಎಂಬ ಗಾದೆಯ ಹಾಗೇ  ಅಮ್ಮ ಎಲ್ಲರ ಪಾಲಿಗೆ ಬಿಡಿಸಲಾಗದ ನಂಟು. ತಾಯಿಯೇ ಜೀವಂತ ದೇವತೆ. ಮಕ್ಕಳನ್ನು ಹೆತ್ತು ಹೊತ್ತು ಒಂದು ಒಳ್ಳೆಯ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಪ್ರಧಾನವಾದದ್ದು. ತಾಯಿಯೇ ಮಕ್ಕಳ ಒಳ್ಳೆಯ ಭವಿಷ್ಯ ನಿರ್ಮಿಸುವ ಶಿಲ್ಪಿಯಾಗಿರುತ್ತಾಳೆ. ಎಂಬುದೆಲ್ಲ ಸರ್ವಕಾಲಿಕ ಸತ್ಯ. ಇದು ಯಾವ ಕಾಲಕ್ಕೂ ಬದಲಾಗಲೂ ಸಾಧ್ಯವೇ ಇಲ್ಲ.     ನನ್ನ ತಾಯಿಯೇ ನನಗೆ ಬಹುದೊಡ್ಡ ಆಸ್ತಿ.  ಮಕ್ಕಳೆಂದರೆ ಅವಳಿಗೆ ಜೀವ. ಹುಟ್ಟಿದ ಮೂರು ಹೆಣ್ಣು ಮಕ್ಕಳಿಗೆ ಸಮಾನ ಪ್ರೀತಿ ತೋರಿಸಿದೆ. ದೂರದ ಊರಲ್ಲಿ  ಓದುವ ನನಗೆ ನೀನು ಬಚ್ಚಿಟ್ಟು ಕೂಡುವ ಹಣವೆಲ್ಲ ಆಸರೆಯಾಗುತ್ತಿತ್ತು.ಪ್ರತಿ ದಿನವೂ ಕರೆ ಮಾಡಿ ಚೆನ್ನಾಗಿ ಓದು ಒಳ್ಳೇಯ ಕೆಲಸಕ್ಕೆ ಹೋಗು ಎಂದು ಹಾರೈಸುತ್ತಿದ್ದೆ. ಇವತ್ತು  ನಾನು ಎಲ್ಲರ ಎದುರು ಯಾರ ಸಹಾಯವಿಲ್ಲದೆ ಓಡಾಡುತ್ತೀದ್ದೆನೆಂ...

lockdown Experience #published in Prajavani Newspaper 😍 read and comment your opinion.

Image

My write up about Actor Sandeep Shetty # published in Prajavani Newspaper 😍

Image

ಎತ್ತ ಸಾಗುತ್ತಿದೆ ನ್ಯಾಯ ?...

Image
         ಎತ್ತ ಸಾಗುತ್ತಿದೆ ನ್ಯಾಯ ?...        ಸುಮಾರು ಮೂರು ವರುಷದ ಹಿಂದಿನ ನೆನಪು.2016 ರ ಅಕ್ಟೋಬರ್ 5ನೇ ತಾರೀಕು ಶಿವಮೊಗ್ಗ ಜೆಲ್ಲೆ ಸಾಗರ ತಾಲೂಕಿನಲ್ಲಿ ನಡೆದ ಭೀಕರ ಭಯಾನಕ ಅತ್ಯಾಚಾರ. ಎಂಟು ವರುಷದ ಹಸುಳೆ ಚರಿತ್ರ. ಶಾಲೆ ಮುಗಿಸಿ ಮನೆಗೆ ಹಿಂದಿರುಗುವಾಗ ಸುಮಾರು ಇಪ್ಪತ್ತಾರು ವರುಷದ ಯುವಕ ನಡೆಸಿದ ಕೃತ್ಯವಿದು. ಮೈಯೆಲ್ಲ ಪರಚಿದ ಗಾಯಗಳು, ಮೈ ಅಲ್ಲಲ್ಲಿ ಮಾಂಸಕಂಡಗಳನ್ನು ಕಿತ್ತು ತಿಂದ ಆ ಕ್ರೂರಿಯ ಹಲ್ಲುಗಳು. ಸಾಗರ ಸರ್ಕಾರಿ ಆಸ್ಪತ್ರೆಯೇ ಒಂದೆರೆಡು ದಿನ ಮೌನವಾಗಿತ್ತು. ನೋಡಲು ಬಂದ ಅದೆಷ್ಟೋ ಹೃದಯಗಳ ಸ್ಪಂದನೆ. ಆ ಕಾಮಕನನ್ನು ಸಾಯಿಸಬೇಕಿತ್ತು. ಅವನನ್ನು ಸುಮ್ಮನೆ ಬಿಡಬಾರದಿತ್ತು. ಪೊಲೀಸರು ಏನು ಮಾಡಿಯಾರು. ಜನರೇ ಅವನಿಗೆ ಬುದ್ದಿ ಕಲಿಸಬೇಕು. ಜೈಲಿಗೆ ಹೋದರೆ ಉಂಡು, ತಿಂದು ಮಹಾರಾಜನ ತರ ಇರುತ್ತಾನೆ ಎಂದು ಒಬ್ಬೊಬ್ಬರು ಒಂದೊಂದು ರೀತಿ ಕೆಂಡಕಾರುತಿದ್ದರು. ಉದ್ದ ಹಾಸಿಗೆಯಲ್ಲಿ ನಿರ್ಲಿಪ್ತವಾದ ದೃಷ್ಟಿಬೀರಿ ಮಲಗಿದ್ದ ಚರಿತ್ರಳಿಗೆ ಇದಾವುದು ತಿಳಿಯುತ್ತಿರಲಿಲ್ಲ. ಕುಣಿದು, ಆಡಿ, ಓಡಾಡಬೇಕಾದ ಮಗು, ವಿಕೃತ ಮನಸ್ಸಿನ ಅಟ್ಟಹಾಸಕ್ಕೆ ಮೌನಿಯಾಗಿತ್ತು. ಪಕ್ಕದಲ್ಲೇ ಕೂತ ಚರಿತ್ರಳ ತಾಯಿಯ ಕಣ್ಣಲ್ಲಿ ದಳ-ದಳನೆ ಕಣ್ಣೀರು ಉದುರುತ್ತಿದ್ದವು. ತಂದೆಯ ಸಿಟ್ಟು ಎಲ್ಲೆ ಮೀರಿತ್ತು."ನಾನು ಅವನನ್ನು ಸಾಯಿಸದೆ ಬಿಡುವುದಿಲ್ಲ" ಎಂದು ಕೂಗಾಡುತಿದ್ದರು. ಅಷ್ಟರಲ್ಲೇ ವ...

ಉಪ್ಪಿನ ಕಾಯಿ ನಾಲಿಗೆಗೆ ಹಿತಕರ.....ಆರೋಗ್ಯಕ್ಕೆ...? This one of my another article plz read and comment.

Image
   ಉಪ್ಪಿನ ಕಾಯಿ ನಾಲಿಗೆಗೆ                                                   ಹಿತಕರ.....ಆರೋಗ್ಯಕ್ಕೆ...?            ಮನೆಗೆ ಅಮ್ಮ ಹೇಗೋ, ಹಾಗೆಯೇ ಊಟಕ್ಕೆ ಉಪ್ಪಿನಕಾಯಿ. ಉಪ್ಪಿನಕಾಯಿ ಇಲ್ಲದೇ ಊಟ ಸಂಪೂರ್ಣ ಎನಿಸುವುದಿಲ್ಲ, ಉಪ್ಪಿನಕಾಯಿ ಎಂದಾಕ್ಷಣ ಬಾಯಲ್ಲಿ ನೀರು ಬರುವುದು ಸಹಜ ಇದನ್ನು ಹಿರಿಯರಿಂದ ಹಿಡಿದು ಕಿರಿಯರವರೆಗೂ ಇಷ್ಟಪಡುತ್ತಾರೆ. ಇಂದು ಊಟ ಸಂಪೂರ್ಣವೆನಿಸಿಲ್ಲ ಎಂದರೆ ಉಪ್ಪಿನಕಾಯಿ ಇರಲಿಲ್ಲ ಎಂದರ್ಥ. ಅಮ್ಮ ಮಾಡುವ ಉಪ್ಪಿನಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ?.... ಈ ಉಪ್ಪಿನಕಾಯಿಯು ದಕ್ಷಿಣಭಾರತೀಯರ ಊಟದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು, ಅಷ್ಟೇ ಏಕೆ ಉತ್ತರ ಭಾರತದಲ್ಲಿಯೂ ಅರ್ಚಾ ಎಂದು ಕರೆಯಲ್ಪಡುವ ಈ ತಿನಿಸು ನಮ್ಮ ಭಾರತೀಯ ಭೋಜನದ ಒಂದು ಅವಿಭಾಜ್ಯ ಅಂಗವಾಗಿದೆ. ಆದರೆ ಇದು ಆರೋಗ್ಯಕ್ಕೆ ಹಿತಕರವಲ್ಲದ, ಆಕರ್ಷಕ ಹಣೆಪಟ್ಟಿ ಕಟ್ಟಿಕೊಂಡು ಮಾರುಕಟ್ಟೆ ತಲುಪುತ್ತಿರುವ ಉಪ್ಪಿನಕಾಯಿಗಳಿಂದಾಗಿ, ಹಳ್ಳಿಗಳ ಮನೆಗಳಲ್ಲಿ ಸುಲಭವಾಗಿ ಸಿಗುತ್ತಿದ್ದ ರುಚಿಕರವಾದ ಉಪ್ಪಿನಕಾಯಿ ತಯಾರಿಕೆಯು ನಿಧಾನವಾಗಿ ಮರೆಯಾಗುತ್ತಿರುವುದು ಬೇಸರದ ಸಂಗತಿ. ಆದರೆ ಇಷ್ಟು ಪ್ರಾಮುಖ್ಯತೆ ಪಡೆದಿರುವ ಈ ಉಪ್ಪಿನ...